ಕರ್ನಾಟಕ ಕ್ರಿಕೆಟ್
ಭಾರತೀಯ ಕ್ರಿಕೆಟ್ಗೆ ಕರ್ನಾಟಕದ ಅಪ್ರತಿಮ ಕೊಡುಗೆ ಭಾರತೀಯ ಕ್ರಿಕೆಟ್ನಲ್ಲಿ ಕರ್ನಾಟಕದ ಪಾತ್ರ ಅಸಾಧಾರಣ. ಮುಂಬೈ ಮತ್ತು ದೆಹಲಿ ನಂತರ ಅತಿ ಹೆಚ್ಚು ಅಂತರರಾಷ್ಟ್ರೀಯ ಆಟಗಾರರನ್ನು ನೀಡಿರುವ ರಾಜ್ಯವೆಂದರೆ ಅದು ಕರ್ನಾಟಕ. ಮುಂಬೈ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅಂತಹ ಸಾರ್ವಕಾಲಿಕ ಶ್ರೇಷ್ಠ ಆಟಗಾರರನ್ನು ನೀಡಿದೆ. ಅತಿ ಹೆಚ್ಚು ಬಾರಿ ರಣಜಿ ಟ್ರೋಫಿ ಗೆದ್ದು ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಪ್ರಭಾವ ಮೂಡಿಸಿದೆ. ದೆಹಲಿ ಬಿಷನ್ ಸಿಂಗ್ ಬೇಡಿ, ವಿರಾಟ್ ಕೊಹ್ಲಿ ಮತ್ತು ವೀರೇಂದ್ರ ಸೆಹವಾಗ್ ಮೊದಲಾದ ತಾರೆಗಳನ್ನು ಭಾರತಕ್ಕೆ ಕೊಟ್ಟಿದೆ. ಆದರೆ ಕರ್ನಾಟಕ ವಿಭಿನ್ನ ಶೈಲಿ ಮತ್ತು ವಿಶಿಷ್ಟ ಪ್ರತಿಭೆಗಳ ಆಟಗಾರರನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದೆ. ಕ್ಲಾಸಿಕಲ್ ಆಫ್ ಸ್ಪಿನ್ನರ್ ಎರಪಳ್ಳಿ ಪ್ರಸನ್ನ , ಗೂಗ್ಲಿ ಸ್ಪೆಷಲಿಸ್ಟ್ ಭಗವತ್ ಚಂದ್ರಶೇಖರ್ , ಕಲಾತ್ಮಕ ಬ್ಯಾಟ್ಸಮನ್ ಗುಂಡಪ್ಪ ವಿಶ್ವನಾಥ್ , ವಿಶ್ವಶ್ರೇಷ್ಠ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ , ಮೈಸೂರಿನ ಎಕ್ಸ್ಪ್ರೆಸ್ ಜಾವಗಲ್ ಶ್ರೀನಾಥ್ , ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಅನಿಲ್ ಕುಂಬ್ಳೆ , ಹಾಗೂ ಭಾರತದ ತಡೆಗೋಡೆ ರಾಹುಲ್ ದ್ರಾವಿಡ್ — ಇಂತಹ ಪ್ರತಿಭಾವಂತ ಆಟಗಾರರ ರಾಜ್ಯ ಕರ್ನಾಟಕ. ಮುಂಬೈ ನಂತರ ಅತಿ ಹೆಚ್ಚು ಬಾರಿ ರಣಜಿ ಟ್ರೋಫಿ ಗೆದ್ದ ಹೆಗ್ಗಳಿಕೆ ಕರ್ನಾಟಕ ತಂಡದ್ದು. ವಿಶ್ವನಾಥ್, ಕುಂಬ್ಳೆ ಮತ್ತು ದ್ರಾವಿಡ್ — ಇವರು ಭಾರತದ ನಾಯಕರಾಗಿ...