Posts

Showing posts from October, 2025

ಪುಷ್ಪಕ ವಿಮಾನ ಮತ್ತು ವಿಂಡ್ಸರ್ ಮ್ಯಾನರ್ — ಬೆಂಗಳೂರಿನ ಮೂಕ ಕಥೆ

Image
  ಪುಷ್ಪಕ ವಿಮಾನ ಎಂಬ ಮೂಕಿ ಚಿತ್ರ ೧೯೮೭ರಲ್ಲಿ ಬಿಡುಗಡೆಯಾಯಿತು. ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದಲ್ಲಿ, ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಈ ಸಿನಿಮಾ ಭಾರತೀಯ ಸಿನೆಮಾದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಭಾಷೆಯ ಅಂತರಗಳೆಲ್ಲವನ್ನೂ ಮೀರಿ, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಕಲಾವಿದರು ಹಾಗೂ ತಂತ್ರಜ್ಞರ ಸಂಯುಕ್ತ ಪ್ರಯತ್ನದಿಂದ ಈ ಸಿನಿಮಾ ತಯಾರಾದದ್ದು ಒಂದು ವೈವಿಧ್ಯಮಯ ಸಂಸ್ಕೃತಿಯ ಪ್ರತೀಕವೇ ಸರಿ ಮತ್ತು ವೈವಿಧ್ಯಮಯ ಸಂಸ್ಕೃತಿಯ ಸಂಕೇತವಾದ ನಮ್ಮ ಬೆಂಗಳೂರಿನಲ್ಲಿ ಈ ಸಿನಿಮಾ ತಯಾರಾಗಿದ್ದು ನಿಜಕ್ಕೂ ಕಾಕತಾಳೀಯ. ಇಂದು ನಮ್ಮ ಬೆಂಗಳೂರಿನಲ್ಲಿ ಭಾಷೆಯ ವಿಷಯವಾಗಿ ಆಗಾಗ್ಗೆ ಉಂಟಾಗುವ ವಿವಾದಗಳ ನಡುವೆ — ಪುಷ್ಪಕ ವಿಮಾನ ಸಿನಿಮಾದ “ಮೂಕತೆ” ನಮಗೆ ಒಂದು ಗಾಢವಾದ ಸಂದೇಶ ನೀಡುತ್ತದೆ. ಎಲ್ಲ ಭಾಷೆಯ ಜನರನ್ನು ಒಗ್ಗೂಡಿಸುವ ಬೆಂಗ್ಳೂರಿನ ಆತ್ಮವನ್ನು ಪುಷ್ಪಕ ವಿಮಾನ ಸಿನಿಮಾ ಮೌನವಾಗಿ ಪ್ರತಿನಿಧಿಸುತ್ತದೆ. ಈ ಚಿತ್ರದ ಬಹುಪಾಲು ಚಿತ್ರೀಕರಣಗೊಂಡಿದ್ದು ಬೆಂಗಳೂರಿನ ಹೃದಯಭಾಗದಲ್ಲಿರುವ ITC Windsor Manor ಹೋಟೆಲಿನಲ್ಲಿ. ಬ್ರಿಟಿಷ್ ಕಾಲೋನಿಯಲ್ ಶೈಲಿಯಲ್ಲಿ ನಿರ್ಮಿತ ಈ ಹೋಟೆಲ್, ಇಂದಿಗೂ ಬೆಂಗಳೂರಿನ ರಾಜಶ್ರೇಯದ, ಶ್ರೇಷ್ಟ ಸೊಗಸಿನ ಪ್ರತೀಕವಾಗಿದೆ. ಹಳೆಯ ಬೆಂಗಳೂರು ಮತ್ತು ಬ್ರಿಟಿಷರ ಕಾಲದ ವಾಸ್ತುಶಿಲ್ಪದ ಸಂಯೋಜನೆಯಂತಿದೆ ಇದರ ವಿನ್ಯಾಸ. ಪುಷ್ಪಕ ವಿಮಾನದಲ್ಲಿನ ಅತ್ಯಂತ ಪ್...

PVR Director's Cutನಲ್ಲಿ ಕಾಂತಾರ ಚಾಪ್ಟರ್ ೧

Image
  PVR Director's Cutನಲ್ಲಿ ಒಂದಿಷ್ಟು ಅನುಭವ! ಕಾಂತಾರ ಚಾಪ್ಟರ್ ೧ ನೋಡಲು ಬೆಂಗಳೂರಿನ ಪ್ರತಿಷ್ಠಿತ ಬ್ರಿಗೇಡ್ ರಸ್ತೆಯಲ್ಲಿರುವ Forum Rex Walk  (ಹಿಂದೆ ಇಲ್ಲಿ ಪ್ರಸಿದ್ಧ ರೆಕ್ಸ್ ಚಿತ್ರಮಂದಿರ ಇತ್ತು) ಗೆ ತೆರಳಿದ್ದೆ. ಇಲ್ಲಿ ಈಗ ಪಿವಿಆರ್ ಸಂಸ್ಥೆಯ ‘Director's Cut’ ಎಂಬ ಹೆಸರಿನ ಮಲ್ಟಿಪ್ಲೆಕ್ಸ್ ಇದೆ. ಇದು ಸಾಮಾನ್ಯ ಮಲ್ಟಿಪ್ಲೆಕ್ಸ್ ಅಲ್ಲ — ನಿಜಕ್ಕೂ ಲಕ್ಸುರಿ ಮಲ್ಟಿಪ್ಲೆಕ್ಸ್! ದೇಶದಲ್ಲಿ ಮುಂಬೈ ಮತ್ತು ದೆಹಲಿಯ ನಂತರ ಇಂತಹ luxury ಮಲ್ಟಿಪ್ಲೆಕ್ಸ್ ಇರುವುದು ಬೆಂಗಳೂರಿನಲ್ಲಿ ಮಾತ್ರ ಎಂಬುದು ಹೆಮ್ಮೆಯ ವಿಷಯ. ನಾನು ಮೈಸೂರಿನ ಗಾಯತ್ರಿ, ಸರಸ್ವತಿ, ಶಾಂತಲಾ ಚಿತ್ರಮಂದಿರಗಳಲ್ಲಿ ಸಿನಿಮಾಗಳನ್ನು ನೋಡುತ್ತಿದ್ದವನು. ಬೆಂಗಳೂರಿಗೆ ಬಂದ ಮೇಲೆ ಅನೇಕ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾಗಳನ್ನು ನೋಡಿದ್ದೆ. ಆದರೆ ಈ Director's Cut  ನೀಡಿದ ಅನುಭವ – ನಿಜಕ್ಕೂ ಅದ್ಭುತ! ನನ್ನ ತಿಳುವಳಿಕೆಯ ಪ್ರಕಾರ, ಕಾಂತಾರ ಚಾಪ್ಟರ್ ೧ ಇಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಸಿನಿಮಾ. ಟಿಕೆಟ್ ದರವು ಸಹ ಸಾಮಾನ್ಯ ಮಲ್ಟಿಪ್ಲೆಕ್ಸ್‌ಗಳಿಗಿಂತ ದುಬಾರಿ — ಆದರೆ ಅನುಭವವನ್ನು ನೋಡಿದರೆ ಅದರ ಬೆಲೆ ತಪ್ಪಲ್ಲವೆನಿಸುತ್ತದೆ. ಇಲ್ಲಿ Wash Roomನಿಂದ ಹಿಡಿದು ಪರದೆವರೆಗೂ — ಎಲ್ಲವೂ ಅಚ್ಚರಿ ಹುಟ್ಟಿಸುವಂತಿದೆ. ನಿಜಕ್ಕೂ ಇಂದ್ರಲೋಕವೇ ಧರೆಗೆ ಇಳಿದು ಬಂದಂತೆ! ಮಲ್ಟಿಪ್ಲೆಕ್ಸ್ ಪ್ರವೇಶದ್ವಾರದಲ್ಲೇ ಡಾ. ರಾಜಕುಮಾರ್...

ಸೋಮೇಶ್ವರ ಸ್ವಾಮಿ ದೇವಾಲಯ, ಖಂಡುಗದಹಳ್ಳಿ – ನನ್ನ ದೃಷ್ಟಿಕೋನ ಬದಲಾಯಿಸಿದ ಸ್ಥಳ!

Image
  ಖಂಡುಗದಹಳ್ಳಿ ಮತ್ತು ಸೋಮೇಶ್ವರ ಸ್ವಾಮಿ ದೇವಾಲಯ – ನನ್ನ ವೈಯಕ್ತಿಕ ಪಯಣ! ಕಡೂರು ತಾಲ್ಲೂಕಿನ ಚಿಕ್ಕಮಗಳೂರು ಜಿಲ್ಲೆಯ ಖಂಡುಗದಹಳ್ಳಿ ಎನ್ನುವ ಪುಟ್ಟ ಹಳ್ಳಿ — ಪ್ರಕೃತಿಯ ಸೊಬಗಿನಿಂದ ಕೂಡಿದ, ಶಾಂತವಾದ ಸ್ಥಳ. ಈ ಹಳ್ಳಿಯ ಹೃದಯ ಭಾಗದಲ್ಲಿ ನೆಲೆಸಿರುವ ಸೋಮೇಶ್ವರ ಸ್ವಾಮಿ ದೇವಾಲಯವು ನನ್ನ ಪೂರ್ವಜರ ಜೀವನದ ಒಂದು ಭಾಗವಾಗಿತ್ತು. ದೇವಾಲಯದ ನಿಖರವಾದ ಇತಿಹಾಸ ನನಗೆ ತಿಳಿದಿಲ್ಲ,  ಮೈಸೂರಿನಲ್ಲಿ ಬೆಳೆದ ನಾನು, ಬಾಲ್ಯದಲ್ಲಿ ಈ ದೇವಾಲಯ ಅಥವಾ ನನ್ನ ಮೂಲ ಊರಾದ ಕಡೂರಿನ ಬಗ್ಗೆ ಅಷ್ಟು ಆಕರ್ಷಣೆಯಿರಲಿಲ್ಲ. ಅಪ್ಪ-ಅಮ್ಮ ಹಾಗೂ ಬಂಧುಗಳ ಜೊತೆ ಕೆಲವೊಮ್ಮೆ ದೇವಾಲಯಕ್ಕೆ ಹೋಗುತ್ತಿದ್ದೆ, ದೇವರಲ್ಲಿ ನಂಬಿಕೆ ಇರಲಿಲ್ಲವೆಂದೇ ಹೇಳಬಹುದು, ಆದರೆ ವರ್ಷಗಳ ನಂತರ, ಈ ದೇವಾಲಯದತ್ತ ಒಂದು ವಿಚಿತ್ರ ಆಕರ್ಷಣೆ ಹುಟ್ಟಿತು. ಈ ದೇವಾಲಯದ ಒಂದು ಆಸಕ್ತಿದಾಯಕ ಅಂಶವೆಂದರೆ ದೇವಸ್ಥಾನದ ಅಂಗಳದಲ್ಲೇ ನೆಲೆಸಿರುವ “ ಬೀದಿ ಬಸಪ್ಪ" . ಇಲ್ಲಿ ಭಕ್ತರು ತಮ್ಮ ಮನದ ಆಶಯಗಳನ್ನು ದೇವರಿಗೆ ಹೇಳಿ, ದೈವೀ ಉತ್ತರ ಪಡೆಯುತ್ತಾರೆ. ವಿಧಿಯ ಪ್ರಕಾರ ಪುರೋಹಿತರು ಎಣ್ಣೆಯಲ್ಲಿ ತೊಳೆದ ಹತ್ತಿಯನ್ನು ಕಲ್ಲಿನ ವಿಗ್ರಹದ ಮೇಲೆ ಹಂಟಿಸುತ್ತಾರೆ.. ಅದು ಬಲಭಾಗಕ್ಕೆ ಬಿದ್ದರೆ ಉತ್ತರ “ಹೌದು,” ಎಡಭಾಗಕ್ಕೆ ಬಿದ್ದರೆ  “ಇಲ್ಲ” ಎಂದು ಅರ್ಥೈಸಲಾಗುತ್ತದೆ. ಮೊದಲು ನಂಬಿಕೆಯಾಗಲಿಲ್ಲ, ಆದರೆ ನಾನು ಸ್ವತಃ ಪ್ರಯತ್ನಿಸಿದಾಗ —...