Posts

Showing posts from January, 2020

ಇನ್ಫೋಸಿಸ್ನಲ್ಲಿ ಹೂಡಿಕೆ ಮಾಡಲು ಇದು ಸಕಾಲವೇ?

Image
ಇನ್ಫೋಸಿಸ್ ಷೇರುಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಏರಳಿತ ಕಂಡಿದೆ. ಇದು ಕಳೆದ ವರ್ಷ ಎಲ್ಲ analystಗಳ ನೆಚ್ಚಿನ IT ಸ್ಟಾಕ್ ಕೂಡ ಆಗಿತ್ತು. ಪ್ರತಿ ಷೇರಿನ ಬೆಲೆ ಗರಿಷ್ಟ 847 ರೂಪಾಯಿಗಳ ತನಕ ಏರಿಕೆ ಕಂಡಿತ್ತು. ತ್ರೈಮಾಸಿಕ ಫಲಿತಾಂಶಗಳು ಮತ್ತು ಆದಾಯ ಪ್ರೊಜೆಕ್ಷನ್ ಕೂಡ ಚೆನ್ನಾಗಿ ಇತ್ತು. ಆದರೆ ಕಂಪನಿಯ ಕೆಲವು ಅನಾಮಧೇಯ ಉದ್ಯೋಗಿಗಳು ಭಾರತ ಮತ್ತು ಅಮೇರಿಕಾದ ಷೇರು ಮಾರುಕಟ್ಟೆಗೆ  whistleblower ಕಂಪ್ಲೇಂಟ್ ಮಾಡಿದ್ದರಿಂದ, ಇನ್ಫೋಸಿಸ್ನ ಷೇರು ಬೆಲೆ ಕನಿಷ್ಟ ಮೊತ್ತ ಅಂದರೆ 635 ರೂಪಾಯಿಗಳಿಗೆ ಇಳಿಕೆ ಕಂಡು, ಹೂಡಿಕದಾರರ ನಂಬಿಕೆಯನ್ನೇ ಕಳೆದುಕೊಂಡಿತ್ತು. ಆದರೆ ಕ್ರಮೇಣ ಷೇರಿನ ಬೆಲೆ ಏರಿಕೆ ಕಂಡು ಇಂದು 740 ರುಪಾಯಿಗೆ ಬಂದು ನಿಂತಿದೆ. ೧೦ January ,೨೦೨೦ ರಂದು, ಇನ್ಫೋಸಿಸ್ನ ಮೂರನೇ ತ್ರೈಮಾಸಿಕ ಫಲಿತಾಂಶ ಹೊರಬಂದಿದೆ. ಮಾರುಕಟ್ಟೆ ಪಂಡಿತರ ನಿರೀಕ್ಷೆಯನ್ನು ಮೀರಿದ ಫಲಿತಾಂಶ ಬಂದಿದೆ. ಹಾಗಾದರೆ ಇನ್ಫೋಸಿಸ್ ನಲ್ಲಿ ಹೂಡಿಕೆ ಮಾಡಲು ಇದು ಸಕಾಲವೇ? ಆದರೆ ಇನ್ಫೋಸಿಸ್ನ whistleblower ಕಂಪ್ಲೇಂಟ್ ಇನ್ನು ಇತ್ಯರ್ಥವಾಗಿಲ್ಲ. ಹೂಡಿಕೆದಾರರಿಗೆ ಇನ್ಫೋಸಿಸ್ನ ವ್ಯವಹಾರಗಳು ಅಂತಹ ಕ್ಲಾರಿಟಿ ಕೊಟ್ಟಿಲ್ಲ ಅಂತಾನೆ ಹೇಳಬಹುದು. ಇನ್ಫೋಸಿಸ್ನ ಸಮಸ್ಯೆ ಬೂದಿ ಮುಚ್ಚಿದ ಕೆಂಡದಂತೆ ಇದೆ. ಇನ್ಫೋಸಿಸ್ ಈ ಎಲ್ಲ ಸಮಸ್ಯೆಗಳಿಂದ ಹೊರಬಂದರೆ, ಖಂಡಿತಾ ಮತ್ತೊಮ್ಮೆ ಹೂಡಿಕದಾರರ ನೆಚ್ಚಿನ ಸ್ಟಾಕ್ ಆಗುವುದರಲ್ಲಿ ಯಾವುದೇ ಅನುಮಾನವಿ...

ಅವನೇ ಶ್ರೀಮನ್ನಾರಾಯಣ ಚಲನಚಿತ್ರ ವಿಮರ್ಶೆ

Image
ನಾನು ಇತ್ತೀಚಿನ ದಿನಗಳಲ್ಲಿ ನೋಡಿದ ಅದ್ಭುತ ಚಲನಚಿತ್ರ ಎಂದರೆ ಅದು "ಅವನೇ ಶ್ರೀಮನ್ನಾರಾಯಣ". ಈ ಸಿನಿಮಾವೇ ಒಂದು ಅನುಭವ ಎಂದರೆ ತಪ್ಪಾಗಲ್ಲ. ಈ ಚಿತ್ರದ ಪ್ರತಿಯೊಂದು ಪಾತ್ರವು ಅದ್ಭುತ. ಛಾಯಾಗ್ರಹಣ ಮತ್ತು ಹಿನ್ನಲೆ ಸಂಗೀತವಂತೂ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಇದು ಹಾಲಿವುಡ್ ಸಿನೆಮಾಗಳಿಂದ ಪ್ರೇರಿತಗೊಂಡಿದ್ದರೂ ಸಹ, ನಮ್ಮ ಮಣ್ಣಿನ ಸೊಗಡು ಸಹ ಈ ಚಿತ್ರಕ್ಕೆ ಇದೆ. ಸಿನಿಮಾದ ಕಥೆ ಸಾಧಾರಣವಾಗಿದ್ದರೂ ಸಹ, ಚಿತ್ರಕೆಥೆ ಅಂತೂ ಅದ್ಭುತವಾಗಿದೆ. ಈ ಚಿತ್ರ ನಮ್ಮನ್ನು ಪ್ರತಿ ಕ್ಷಣ ಕಾಡುತ್ತದೆ.ಒಬ್ಬ ಪ್ರೇಕ್ಷಕ ಖಂಡಿತವಾಗಿಯೂ ಈ ಸಿನಿಮಾದಲ್ಲಿ ಪಯಣಿಸುತ್ತಾನೆ. ಈ ಸಿನಿಮಾದ ನಿರ್ದೇಶಕ ಸಚಿನ್ ರವಿ ಅವರ ಮೊದಲ ಸಿನಿಮಾ ಅಂತ ಎಲ್ಲಿಯೂ ನಮಗೆ ಅನಿಸುವುದಿಲ್ಲ. ಅವರ ಸಂಕಲನ ಕೂಡ ಅಷ್ಟೇ ಚುರುಕಾಗಿದೆ.ರಕ್ಷಿತ್ ಶೆಟ್ಟಿ ಅವರ ನಿರ್ದೇಶನದ ಅನುಭವ ಖಂಡಿತಾ ಸಚಿನ್ ರವಿ ಅವರಿಗೆ ಸಹಾಯ ಮಾಡಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಕಲಾವಿದರನ್ನು ಎಷ್ಟೇ ಮೆರೆಸಿದರೂ, ಈ ಸಿನೆಮಾವೆಂಬುದು ಸದಾ ತಂತ್ರಜ್ಞರ ಮಾಧ್ಯಮ ಎನ್ನುವುದು ಪದೇ ಪದೇ ರುಜುವಾತು ಪಡಿಸುತ್ತಲೇ ಇರುತ್ತದೆ. ನನ್ನ ಪ್ರಕಾರ ಈ ಸಿನಿಮಾದ ನಿಜವಾದ ಹೀರೋಗಳೆಂದರೆ, ಚಿತ್ರಕಥೆ ಬರೆದ ರಕ್ಷಿತ್ ಶೆಟ್ಟಿ ಮತ್ತವರ ಏಳು ಜನ ಗೆಳೆಯರು, ನಿರ್ದೇಶಕ ಸಚಿನ್ ರವಿ, ಛಾಯಾಗ್ರಾಹಕ ಕರಮ್ ಚಾವ್ಲಾ, ಸಂಗೀತ ನಿರ್ದೇಶಕರಾದ ಅಜನೀಶ್ ಮತ್ತು ಚರಣರಾಜ್. ಈ ಚಿತ್ರದ ಪ್ರತಿ ...

ಕುದರೆಮುಖ ರಾಷ್ಟ್ರೀಯ ಉದ್ಯಾನವನ

Image
ಕುದರೆ ಮುಖ ಆಕಾರದ ಪರ್ವತ ಕುದರೆಮುಖ ರಾಷ್ಟ್ರೀಯ ಉದ್ಯಾನವನ, ಕರ್ನಾಟಕದ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೆ. ಇದು ಬೆಂಗಳೂರಿಂದ ಸುಮಾರು ೩೩೦ km ದೂರದಲ್ಲಿ ಇದೆ. ಇದು ಸಂರಕ್ಷಿತ ಅರಣ್ಯ ಪ್ರದೇಶವಾದರಿಂದ ಇಲ್ಲಿ ಖಾಸಗಿ ಹೋಂಸ್ಟೇ ಅಥವಾ ರೆಸಾರ್ಟ್ಗಳಿಗೆ ಅವಕಾಶವಿಲ್ಲ. ಇಲ್ಲಿ ಪ್ರವಾಸಿಗರು ಉಳಿಯಬೇಕೆಂದರೆ, ಅರಣ್ಯ ಇಲಾಖೆಯ ಜಂಗಲ್ lodges ಅಂಡ್ ರೆಸಾರ್ಟ್ಸ್ ನಡೆಸುವ ಭಗವತಿ ನೇಚರ್ ಕ್ಯಾಂಪ್ ಇದೆ. ಭಗವತಿ ನೇಚರ್ ಕ್ಯಾಂಪ್ನಲ್ಲಿ ಟೆಂಟ್ ಹೌಸ್,ವುಡನ್ cottages ಮತ್ತು dormitory ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇದೆ. ಭಗವತಿ ನೇಚರ್ ಕ್ಯಾಂಪ್ನಲ್ಲಿ ಉಳಿದುಕೊಳ್ಳಬೇಕೆಂದರೆ, ಜಂಗಲ್ lodges ಮತ್ತು ರೆಸಾರ್ಟ್ಸ್ ವೆಬ್ಸೈಟ್ ಅಲ್ಲಿ ಬುಕ್ ಮಾಡಬಹುದು. ಕುದರೆಮುಖ ಸಮೀಪ ಸ್ಥಳಗಳಾದ ಸಂಸೆ ಮತ್ತು ಕಳಸ ಗಳಲ್ಲಿ ಖಾಸಗಿ ರೆಸಾರ್ಟ್ಸ್ ಮತ್ತು ಹೋಂಸ್ಟೇ ಗಳು ಸಾಕಷ್ಟು ಸಂಖ್ಯೆ ಅಲ್ಲಿ ಸಿಗುತ್ತವೆ. ಕುದರೆಮುಖದಲ್ಲಿ ಚಾರಣಪ್ರಿಯರಿಗೆ ಸಾಕಷ್ಟು ಸಂಖ್ಯೆಯಲ್ಲಿ ಟ್ರೆಕಿಂಗ್ ಮಾಡಲು ಉತ್ತಮ ಪೀಕ್ ಪಾಯಿಂಟ್ ಗಳಿವೆ. ಅವುಗಳಲ್ಲಿ ಕುರಿಂಜಲ್ , ಕ್ಯಾತನಮಕ್ಕಿ ಮತ್ತು ಕುದರೆಮುಖ ಪೀಕ್ ಪಾಯಿಂಟ್ ಪ್ರಮುಖ ಸ್ಥಳಗಳು. ಒಂದು ಕಾಲದಲ್ಲಿ ಕೇಂದ್ರ ಸರ್ಕಾರದ ಅಂಗ ಸಂಸ್ಥೆ ಕುದರೆಮುಖ ಗಣಿಗಾರಿಕೆ ಕಂಪನಿ( KIOCL ) ಇಲ್ಲಿ ಗಣಿಗಾರಿಕೆ ಮಾಡುತ್ತಿದ್ದ ಕಾರಣ(ಈಗ ಗಣಿಗಾರಿಕೆ ನಿಷೇದಿಸಲಾಗಿದೆ), ಇಂದಿಗೂ ಸಹ ಪಾಳು ಬಿದ್ದ ಪೆಟ್ರೋಲ್ ಬಂಕ್, ಕೇಂದ್ರೀಯ ವಿ...

ಸ್ಟಾಕ್ ಮಾರ್ಕೆಟ್ ಎಂಬ ಮಾಯಾಜಾಲ

Image
ಭಾರತದ ಮಧ್ಯಮ ವರ್ಗದ ಜನರಿಗೆ ಶೇರ್ ಮಾರ್ಕೆಟ್ ಅಂದ್ರೆ ಏನೋ ಒಂಥರಾ ಭಯ. ಸಾಕಷ್ಟು ವಿದ್ಯಾವಂತರೇ ಇರುವ ಈ ಮಧ್ಯಮ ವರ್ಗದಲ್ಲಿ, ರಿಸ್ಕ್ ಯಾಕೆ ಅಂತ ೯೦% ಜನ ಈ ಶೇರ್ ಮಾರ್ಕೆಟ್ ನಿಂದ ದೂರವೇ ಇದ್ದಾರೆ. ಬೇಕಾದರೆ ಗಮನಿಸಿ ನೋಡಿ, ಇವರೆಲ್ಲರೂ ಯಾವುದೇ ರಿಸ್ಕ್ ಇಲ್ಲದೆ ದುಡ್ಡು ತಂದುಕೊಡುವ FD , LIC ಇನ್ಶೂರೆನ್ಸ್ ಪಾಲಿಸಿ ಅಥವಾ PPF ತರಹದ ಅಥವಾ gold ಅಥವಾ ರಿಯಲ್ ಎಸ್ಟೇಟ್ನಲ್ಲಿ ತಮ್ಮ ಹಣವನ್ನು ಇನ್ವೆಸ್ಟ್ ಮಾಡುತ್ತಾರೆ. LIC ,ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ಗಳು ಇದೆ ಮಧ್ಯಮ ವರ್ಗದ ಜನರ ಹಣವನ್ನು ಶೇರ್ ಮಾರ್ಕೆಟ್ನಲ್ಲಿ ತೊಡಗಿಸಿ ಸಾಕಷ್ಟು ಹಣವನ್ನು ಸಂಪಾದಿಸುತ್ತಿದ್ದಾರೆ. ಹಾಗಾದರೆ ಈ ಶೇರ್ ಮಾರ್ಕೆಟ್ ನಲ್ಲಿ ದುಡ್ಡು ಮಾಡುವುದು ಸುಲಭವ? ಖಂಡಿತಾ ಸುಲಭವಲ್ಲ. ಈ ಶೇರ್ ಮಾರ್ಕೆಟ್ ನಲ್ಲೂ ಕೂಡ ೯೫% ಜನರು ಹಣವನ್ನು ಕಳೆದುಕೊಳ್ಳುತ್ತಾರೆ. ಹಾಗೆ ನೋಡಿದರೆ ಎಲ್ಲ ಕ್ಷೇತ್ರಗಳಲ್ಲೂ ಸಕ್ಸಸ್ ರೇಟ್ ಇರುವುದು ಕೇವಲ ೫% ಅಥವಾ ೧೦%. ಎಲ್ಲರೂ ಶಾರುಖ್ ಖಾನ್ ಆಗಲು ಸಾಧ್ಯವಿಲ್ಲ ಅಥವಾ ಎಲ್ಲರೂ ನರೇಂದ್ರ ಮೋದಿ ಆಗಲೂ ಸಾಧ್ಯವಿಲ್ಲ. ದೇಶಕ್ಕೆ ಒಬ್ಬನೇ ಪ್ರಧಾನ ಮಂತ್ರಿ ಮತ್ತು ಒಬ್ಬನೇ ಸೂಪರ್ಸ್ಟಾರ್ ಮತ್ತು ಹಾಗೆಯೇ ಒಂದು ಕ್ರಿಕೆಟ್ ಟೀಮ್ನಲ್ಲಿ ಆಡುವುದು ಕೇವಲ ೧೧ ಜನ ಮಾತ್ರ. ಹಾಗೆಯೇ ಶೇರ್ ಮಾರ್ಕೆಟ್ ನಲ್ಲಿ ದುಡ್ಡು ಮಾಡಬೇಕಾದರೆ ಸಾಕಷ್ಟು ಅಧ್ಯಯನ ಮುಖ್ಯ ಮತ್ತು ಮಾರ್ಕೆಟ್ ಏರಳಿತದ ಬಗ್ಗೆ ಸಾಕಷ್ಟು ಜ್ಞಾನ ಮತ್ತು ತಿಳುವಳಿಕೆ ಅತ್ಯಗತ...